Total Pageviews

Showing posts with label ಕನ್ನಡ. Show all posts
Showing posts with label ಕನ್ನಡ. Show all posts

Wednesday, May 13, 2020

ಕಾಲ್ನಡಿಗೆ


ಒಂಬತ್ತು ದಿನಗಳ ಹಿಂದೆ ಪ್ರಚಲಿತ ವಿದ್ಯಾಮಾನಗಳನ್ನು ಓದಬೇಕಾದರೆ ಒಂದು ವರದಿ ತುಂಬಾನೇ ನೋವುಂಟು ಮಾಡಿತು. ರೊಟ್ಟಿಯ ತುಂಡುಗಳು, ಹರಿದ, ಸವೆದ ಚಪ್ಪಲಿ, ಅಲ್ಲಲ್ಲೇ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ 5 - 10 ರೂಪಾಯಿಯ ನೋಟುಗಳನ್ನು ಕಂಡು ಮನಸ್ಸು ಕಲಕಿತು....ಇನ್ನೂ ದೇಹಗಳ ಬಗ್ಗೆ ಹೇಳೋಕೆ ನನ್ನಿಂದಾಗದು.... ಆ ಚಿತ್ರಣ, ಅವರ ಆ ಅಸಹಾಯಕತೆ, ಕ್ರೂರಿ ಕಾಲ ಎಲ್ಲವನ್ನೂ ಮರೆಯಲಾಗದೆ ಕಳೆದು ಹೋದ ಎಷ್ಟೋ ಜೀವಗಳಿಗೆ ನಮಿಸುತ್ತ.... ಕ್ಷಮೆ ಕೋರುತ್ತಾ.... 


Typos: ಜೋಳಿಗೆ, ಹೋದಾತೆ


Thursday, May 7, 2020

ದೂರ ತೀರ

೨೦೨೦ನೇ ಇಸವಿ ಶುರುವಾಗಿ ೪ ತಿಂಗಳು ತುಂಬಿ ೫ಕ್ಕೆ ಬಿದ್ದರೂ.... ದಿನಗಳು ಎಲ್ಲಿ ಓಡುತಿವೆ, ಜೀವನ ಎತ್ತ ಸಾಗಿದೆ ಎಂದು ದೂರಕ್ಕೆ ದೃಷ್ಟಿ ನೆಡುವ ಹಾಗೆ ಇಡೀ ಜಗತ್ತನ್ನೇ ಕುಣಿಸುತಿದೆ ಕೊರೋನ ಭೀತಿ. ಸಮುದ್ರಕ್ಕೆ ಇಳಿದ ಮೇಲೆ ಈಸಬೇಕು, ಇದ್ದು ಜಯಿಸಬೇಕು.... ಜೀವನದ ಸಾಗರದಲ್ಲಿ ಪಯಣ ಹೊರಟಿರುವ ನಾವು ಏನೇ ಕಷ್ಟಗಳು ಎದುರಾದರೂ ಹಡಗನ್ನು  ಮುನ್ನಡೆಸುವ . ಧೃತಿ ಹೊಂದಿ ಸಾಗುತಿರಬೇಕು.... ಜೀವನ ಎಂಬ ಸಾಗರವು ನಗಿಸಿ, ಅಳಿಸಿ, ನಮ್ಮ ಅಳುವಿನಲ್ಲಿ ತಾ ಕುಣಿದು ತುಳುಕುವುದು. ಆದರೂ, ಜೀವನ ನಡೆಸಲೇಬೇಕು.....




ತಿಂಗಳಿನ ಬೆಳಕಿನಲಿ ಹಡಗು ಸಾಗಿರಲು,
ನರ್ತಿಸಿದೆ ಕಡಲು.....
ತೇಲುವುದೋ ಮುಳುಗುವುದೋ ಒಂದು ತಿಳಿಯದಿರಲು....
ನರ್ತಿಸಿದೆ ಕಡಲು...

ಚದುರುವುದೇ ಕಾರ್ಮೋಡ?
ತಪ್ಪುವುದೇ ಅಪಘಾತ?
ಯಾರೊ ಹೂಡಿದಾ ಸಂಚು......
ಬಾನಲೆರಗಿತೊಂದು ಮಿಂಚು...

ಮೇಘ ಗುಡುಗಿ ಆರ್ಭಟಿಸಿರಲು....
ನರ್ತಿಸಿದೆ ಕಡಲು......


ಹುಟ್ಟು ಹಾಕಿ ಪಯಣ,
ನಡೆಸುವುದೇ ಜೀವನ
ಬಿಡದೇ ನೀ ಸ್ಥೈರ್ಯ......
ನಡೆಸು ನಿನ್ನ ಕಾರ್ಯ....

ದೂರ ದಡವು ಕಾಣುತಲಿರಲು.....
ಮುಳುಗಲೀ ದಿಗಿಲು

Thursday, February 14, 2019

ಕೊನೆ ಇದಲ್ಲ.....

ಫೆಬ್ರುವರೀ ೧೪ರಂದು ಪುಲ್ವಮಾದಲ್ಲಿ ನಡೆದ ಸೀಆರ್ಪೀಎಫ್ ಸೈನಿಕರ ಹತ್ಯಾಕಾಂಡವನ್ನು ಖಂಡಿಸುತ್ತಾ..... ಯೋಧರ ಆತ್ಮಕ್ಕೆ ಶಾಂತಿಯನ್ನು ಕೋರುತ್ತಾ.... ಬಂಧು ಬಳಗಕ್ಕೆ ಬೆಂಬಲವನ್ನು ಸೂಚಿಸುತ್ತಾ......

ನೀತಿ ನಿಯಮವಿಲ್ಲದ ಜನುಮ
ಮಾನವೀಯತೆಯ ಮಾರಣಹೋಮ
ಮಾಡಿ ಕುಹಕವಾಡಿ  ಗಹಗಹಿಸಿ ನಗದಿರು
ಕೊನೆ ಇದಲ್ಲ ಸದೆಬಡಿವರು, "ಅಲ್ಲೇ" ನೀನು ಅಡಗಿರು
ಹೇಡಿ ನೀನು, ಹೇಯ  ನಿನ್ನ ಕೃತ್ಯ, ಅಡಗಿರು
ಕೊನೆ ಇದಲ್ಲ ಸದೆಬಡಿವರು, "ಅಲ್ಲೇ" ನೀನು ಅಡಗಿರು
ಹರಿಸಿರುವೆ ತಾಯಿಯ ಹಣೆಯಲ್ಲಿ ನೆತ್ತರು
ಕೊನೆ ಇದಲ್ಲ ಸದೆಬಡಿವರು, "ಅಲ್ಲೇ" ನೀನು ಅಡಗಿರು
ಕೋಟಿ ಹೃದಯ ಮಿಡಿದಿದೆ ಅಗಲಿದ ಚೇತನಕೆ
ಹಿಡಿಶಾಪವಿದೋ ಉಗ್ರನೇ, ಆ ನಿನ್ನ "ಸ್ವರ್ಗ"ಕೆ
ಗ್ರಹಣ ಕಳೆಯೇ ಮರಳಬೇಕು, ಮರಳುವನು ಸೂರ್ಯ
ಕಣ್ಣೀರು ಹಿಂಗಿದರೂ, ಹಿಂಗದು ನಮ್ಮವರ ಶೌರ್ಯ, ಆತ್ಮ ಸ್ಥೈರ್ಯ!
ಹೇಡಿ ನೀನು, ಹೇಯ  ನಿನ್ನ ಕೃತ್ಯ, ಅಡಗಿರು
ಕೊನೆ ಇದಲ್ಲ ಸದೆಬಡಿವರು, "ಅಲ್ಲೇ" ನೀನು ಅಡಗಿರು
                                                                 - - ಸೋಶ್

PC: Internet

Tuesday, February 20, 2018

ಸ್ಪೂರ್ತಿ!


In the pic : Maneet, my friend's son :)

dinavu udayisuva sooryanalla
tampereva irulalla
beesuva gaaliyalla
suriva maleyalla
naguva maguvalla
aluva mogavalla
hita mitavada mishranadi adugeyu poorti
anteye kaviya manadalli mooduva spoorthi

novige nalivina lepana
malagida nenapina sinchana
bhavodvegada narthana
sallapada aalaapana
jagake hidida darpana
kaledukonda ashrutarpana
bhavanegalu aadaga bharti
kavite geechalu mooduvude spoorthi

Translation:

It is neither the rising sun
nor the soothing night
It is neither the wind
nor the pouring rain
It is neither the smiling baby
Nor the weeping face
Inspiration to a poet is
Such that the essences of a satisfying recipe

Smearing of happiness to the pain
Sprinkle of memories to sleeping heart
Dancing of the emotions within
Beginning of romance
Mirror to the world
Mourning to the lost
Inspiration to a poet is
That which happens when emotions can't be held anymore!

Tuesday, January 2, 2018

ಕ್ಷಣ


ಎಲ್ಲವೂ ಕ್ಷಣಿಕ.... ನಿನ್ನ ಕ್ಷಣಕೆ, ನೀನೇ ನಾವಿಕ! 



Saturday, October 14, 2017

ಪಯಣ

ಹೇಳದೆ ಮನೆಯಿಂದ ಯಾರಾದರೂ ಹೊರಟೆರೆಂದರೆ ಮನದಲ್ಲಿ ಬೇಕಾದಷ್ಟು ಕಸಿವಿಸಿ, ಪ್ರಶ್ನೆಗಳು ಬಂದರೂ ಮುಂದೊಂದು ದಿನ ಸಿಕ್ಕಿದಾಗ ಕೇಳಬಹುದು, ಅಥವಾ ಫೋನ್ ಮಾಡಬಹುದು.... ಸ್ವಲ್ಪ ನೋಟ್ ರೀಚಬಲ್ ಆದ್ರೇನೇ ನಮಗೆ ಸಹಿಸಲಾಗದು. ಹಾಗಿದ್ದಾಗ, ಪ್ರೀತಿಪಾತ್ರರು ಯಾವಾಗಲೂ ನಮ್ಮೊಟ್ಟಿಗೆ ಇರುತಾರೆಂದು ತಿಳಿದಿರುವ ಮನಕ್ಕೆ ಆಘಾತ ಆಗೋದು, ಹೇಳದೆ ಕೇಳದೆ ಹೊರಟಾಗ - ಮತ್ತೊಂದು ಜಗಕ್ಕೆ .... ಆ ನೋವು ಸ್ವಂತದ್ದೇ ಆದರೂ, ಭವನಗಳ ಸಂಬಂಧಗಳು ಒಂದೇ ತರ್ನಾದ್ದು ..... ಇತ್ತೀಚಿಗೆ ಅಗಲಿದ ನನ್ನ ಗೆಳೆಯರ ಪ್ರೀತಿಪಾತ್ರರಿಗೆ ಅರ್ಪಣೆ..... "ಪಯಣ" 



ಕಣ್ಣಿನಾ ಕಡಲಿಂದ
ಜಾರಿತೊಂದು ಹನಿಯು
ಮನದ ಮೂಲೆಯಿಂದ
ಕಾಣೆಯಾಯ್ತು ದನಿಯು....

ಹೆಗಲನೇರಿ ಭಾರ,
ದೂರವಾಯ್ತು ತೀರಾ.....
ನೆರಳಿನಂತೆ ಜೊತೆಯಲಿದ್ದುಕಡಲ ಸೇರಿ ನೇಸರಾ........
ಗೆಳೆಯನಾಯ್ತು ಬೇಸರ

ಗಾಳಿ ಹಿಂದೆ ಮುಂದೆ ಸೋಕಿ,
ನಿನ್ನ ನೆನಪೇ ಭಾಸವಾಗಿ
ಕೊನೆಯ ಮಾತು ಹೇಳದೆಯೇಹೊರಟೆ ಎಲ್ಲಿ ಎತ್ತರಾ.....
ನೀಡದಂತೆ ಉತ್ತರ...


ಕೊಡಲಿ ಏನು ಅವನಿಗೆ
ನೋಡಲೊಮ್ಮೆ ನಿನ್ನನು?
ಒಮ್ಮೆ ಬಾ ಅರೆ ಘ್ಹಳಿಗೆ,
ಬೇರೆ ಏನು ಬೇಡೆನು

Tuesday, September 5, 2017

ಓಡದಿರು ಮನಸೇ

ಓಡದಿರು ಮನಸೇ,
ನೀ ಉತ್ತರಿಸದೇ....
ಕಾಡದಿರು ಕನಸೇ,
ನೀ ಬೆಂಬಿಡದೇ....

ಮೀನಿನ ಹೆಜ್ಜೆಯಂತಾಗದಿರು
ಗುರುತು ಒಂದಾದರೂ ಕೊಡು
ಮೊದಲ ಮಳೆಯಂತಿರುಸುರಿದು....
ನನ್ನೆದೆಯಾ ಘಮ್ಮೆನಿಸಿಬಿಡು...

ನಲಿದಿರು ಮನಸೇ,
ನೀ ಬೇಸರಿಸದೇ....
ಕಾಡುತಿರು ಕನಸೇ,
ನೀ ಬೆಂಬಿಡದೇ


Sunday, May 14, 2017

ಒಂದು ಮೊಟ್ಟೆಯ ಕಥೆ - ಚಿತ್ರ ವಿಮರ್ಶೆ

ಹೀಗೊಂದು ದಿನ ಒಂದು ಕನ್ನಡ ಚಿತ್ರದ ವಿಮರ್ಶೇನ  ನಾನು ಬರೀತೀನಿ ಅಂತ ಅಂದುಕೊಂಡಿರಲಿಲ್ಲ. ಆದರೆ ಇವತ್ತ್ತು ಬರೆಯೋ ಮನಸಾಯಿತು - ಒಂದು ಮೊಟ್ಟೆಯ ಕಥೆ ಅಂಥಾದ್ದು!
ವಿದೇಶಕ್ಕೆ ಹಾರಿ ಮೂರು ವರ್ಷಗಳಾಗಿದ್ದರೂ, ಬೆರಳೆಣಿಕೆಯ ಕನ್ನಡ ಚಿತ್ರಗಳು ಥಿಯೇಟರ್ ತಲುಪಿದವು, ಅದರಲ್ಲಿ ಕೆಲವು ಮಾತ್ರ ನನ್ನನ್ನು. ಒಂದು ಮೊಟ್ಟೆಯ ಕಥೆ ತಂಡ ಚಿತ್ರದ ಪ್ರಿಮಿಯರ್ ಅನ್ನು ಡ್ಯಾಲಸ್ ಅಲ್ಲಿ ಮಾಡುತಿದ್ದಾರೆ ಅಂತ ನಿರ್ಮಾಪಕರಾದ ಪವನ್ ಕುಮಾರ್ ಅವರು ತುಂಬಾನೇ ಪ್ರಚಾರ ಮಾಡಿದ್ದರ ಫಲ, ಇಲ್ಲಿನ ಜನರು ಅದನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಿ ಹೌಸ್ ಫುಲ್ ಕೊಟ್ಟು ಸ್ಪಂದಿಸಿದರು. ಚಿತ್ರಮಂದಿರಕ್ಕೆ ಅಪರೂಪಕ್ಕೆ ಕಾಲಿಡುವ ಕನ್ನಡಿಗರ ಬಳಿ ಒಂದು ಪ್ರಯೋಗಾತ್ಮಕ ಚಿತ್ರಾನ ತಂದು ಯಶಸ್ವಿ ಆಗೋಕೆ ತುಂಬಾನೇ ಆತ್ಮವಿಶ್ವಾಸ ಬೇಕು - ಜೊತೆಗೆ ಅಂತಹ ಕಥೆಯೂ ಬೇಕು. ಒಂದು ಮೊಟ್ಟೆಯ ಕಥೆ ಅದಕ್ಕೊಂದು ಒಳ್ಳೆ ಉದಾಹರಣೆ.

ಬಿರಿಯಾನಿ ತಿನ್ನೋವಾಗ ಬಾಯಿಗೆ ಏಲಕ್ಕಿ ಸಿಗಬಾರ್ದು ಅಂತ ಬೇಡಿಕೊಂಡು ತಿನ್ನುವ ಹಾಗೆ ಚಿತ್ರ ನೋಡುತ್ತಾ, ನಾನು ಸಹ "ಪ್ಲೀಸ್, ನೆಕ್ಸ್ಟ್ ಸೀನ್ ಹಾಗಿರದಿರಲಿ, ಹೀಗಿರದಿರಲಿ" ಅಂತ ಬೇಡಿಕೊಳ್ಳುತ ಇದ್ದೆ(ತುಂಬಾ ಜನರಿಗೆ ಚಿತ್ರಕ್ಕೆ ಬನ್ನಿ ಅಂತ ಒತ್ತಾಯ ಮಾಡಿ ಕರೆಸಿದ್ದೆ, ಅದರ ಭಯ ಬೇರೆ!!) ಸಿನಿಮಾ ಶುರು ಆದಗಿಂದ ಕೊನೆಯ ವರೆಗೂ ಎಲ್ಲೂ ಇಂತ ಒಂದು ಸೀನ್ ಬೇಕಿರಲಿಲ್ಲವೇನೋ ಅನಿಸದಷ್ಟು ಚೊಕ್ಕಟವಾದ ಎಡಿಟಿಂಗ್, ಎಲ್ಲಿ ಎಷ್ಟು ಬೇಕೋ ಅಷ್ಟೇ ನಟಿಸಿರುವ ಎಲ್ಲಾ ಕಲಾವಿದರು, ತೀರಾ ನೈಜವಾಗಿರುವ ಲೊಕೇಶನ್ಸ್, ಕಾಸ್ಟ್ಯೂಮ್ ಮತ್ತು ಮೇಕಪ್ ಎಲ್ಲವೂ ಕಥೆಯನ್ನು ಸಾಮಾನ್ಯನಿಗೆ ಇನ್ನೂ ಹತ್ತಿರ ಮಾಡುತ್ತದೆ ( ಹಾಡಿನ ಚಿತ್ರೀಕರಣದಲ್ಲಿ ಬಟ್ಟೆ ಒಗೆಯಲು ಬಂದು ನಿಂತು ಯೋಚನೆಯಲ್ಲಿ ಮುಳುಗಿರುವ ಹುಡುಗಿಯ ಗಮನಕ್ಕೆ ಬಾರದ ನೀರು ತುಂಬಿ ಹರಿಯುತ್ತಿರುವ ಸನ್ನಿವೇಶವಾಗಲಿ, ಮನಗೆ ಯಾರೋ ಬಂದಾಗ ಅಮ್ಮನನ್ನೇ ಕರೆಯುವ ಮಗ and many subtle acting scenes, etc etc).
ಮುಖ್ಯ ಪಾತ್ರದಾರಿ ಹಾಗೂ ನಿರ್ದೇಶಕರಾದ ರಾಜ್ ಬೀ ಶೆಟ್ಟಿಯವರ ಮೊದಲನೇ ಚಿತ್ರವಾದರೂ ಪ್ರತಿಯೊಬ್ಬನಲ್ಲೂ ಯಾವುದೋ ರೂಪದಲ್ಲಿ ಇರುವ ಜನಾರ್ಧನನನ್ನು ಕಣ್ಣ ಮುಂದೆ ತಂದು ನಿಲ್ಲಿಸುವಲ್ಲಿ ಎಲ್ಲೂ ತಡಕಾಡದೆ ಸಲೀಸಾಗಿ ಅಭಿನಯಿಸಿದ್ದಾರೆ. ನನಗೆ ತುಂಬಾನೇ ಇಷ್ಟವಾದದ್ದು, ಕನ್ನಡಿಯ ಮುಂದೆ ಕೂತು ಮನಸಿನಲ್ಲೇ ಮಾತಾಡುವ ಸೀನ್. ಬಾಯಲ್ಲಿ ಡೈಲಾಗ್ ಹೇಳದೆ ಭಾವನೆಗಳನ್ನು ಅಭಿವ್ಯಕ್ತಿಗೊಳಿಸುವುದನ್ನು ತುಂಬಾನೇ ನಾಟುವ ಹಾಗೆ ಮಾಡಿದ್ದಾರೆ - I think it is very hard.
ಮೊಟ್ಟೆ ಹಾಡಿನ ಶುರುವಿನಲ್ಲಿ ಬಾಯಿತಪ್ಪಿ ಬರುವ ಬೈಗುಳ ಅಥವಾ ದ್ವಂದ್ವಾರ್ಥ ತುಂಬಿದ ಸಂಭಾಷಣೆ ಸರಾಗವಾಗಿಯೇ ಇದೆಯೇನೋ ಎಂದು ಭಯ ಪಟ್ಟಿದ್ದ ನನಗೆ, ಚಿತ್ರದ ತಿಳಿಹಾಸ್ಯ, ಮಳೆಯ ನಂತರದ ತಂಗಾಳಿಯಂತೆ ಮುದ ನೀಡಿತು. ತುಂಬಾನೇ ಸಿಂಪಲ್ ಆಗಿರುವ ಸಂಗೀತ ಹಿತವಾಗಿದೆ.
ಜನಾರ್ದನನ ಜೊತೆಗೆ ಶ್ರೀನಿವಾಸ್ ಹಾಗೂ ಜನಾರ್ದನನ ತಮ್ಮನ ಪಾತ್ರದಾರಿಗಳ ಅಭಿನಯ ನನಗೆ ತುಂಬಾನೇ ಇಷ್ಟ ಆಯ್ತು - ಹಿತಮಿತ.
ಶುದ್ಧ ಮಂಗಳೂರಿನ ಕನ್ನಡ - icing on the cake!
ಒಂದು ಚಿತ್ರ ಹಿಟ್ ಆಗಬೇಕಾದರೆ ೫-೬ ಹಾಡುಗಳು, ಭವ್ಯವಾದ ಲೋಕೇಶನ್ಗಳು, ದುಬಾರಿ ಸೆಟ್ಸ್ ಅಥವಾ ಮಚ್ಚು ಕತ್ತಿ ಬೇಕಿಲ್ಲ. ಈ ಚಿತ್ರ ನೋಡುವಾಗ ಜನರ ಶಿಳ್ಳೆ ಹಾಗೂ ಚಪ್ಪಾಳೆ ಬಿದ್ದದ್ದು ಅಡಿಯಿಂದ ಮುಡಿಯವರೆಗೂ ೩೬೦ ಡಿಗ್ರೀ ಕ್ಯಾಮರ ಸುತ್ತಿಸಿ ಸ್ಲೋ ಮೋಶನ್ನಲ್ಲಿ ಹೀರೋನ ಪರಿಚಯಿಸಿದಾಗ ಅಥವಾ ಓವರ್ ತೆ ಟಾಪ್ ಡೈಲಾಗ್ಗೆ ಅಲ್ಲ..... ಕಥೆ ಗೆದ್ದಾಗ, ನಮ್ಮ ದೈನಂದಿನ ಜೀವನವನ್ನ ಹಾಸ್ಯ ರೂಪಕವಾಗಿ ಕಣ್ಣಿನ ಮುಂದೆ ತಂದು ನಿಲ್ಲಿಸಿದಾಗ.


ಇನ್ನೆಂದೂ ಇಲ್ಲಿ ಥಿಯೇಟರ್ನಲ್ಲಿ ಕನ್ನಡ ಚಿತ್ರ ನೋಡುವುದು ಪ್ರಯೋಜನವಿಲ್ಲ ಎಂದುಕೊಂಡಿದ್ದ(ಹಿಂದಿನ ಕೆಲವು ಅನುಭವಗಳು!) ನಮ್ಮಂಥ ಜನರಿಗೆ ಈ ಚಿತ್ರ ಭರವಸೆಯನ್ನ ಮೂಡಿಸಿದೆ. ಕೇವಲ ೧೬ ದಿನಗಳಲ್ಲಿ ಅಚ್ಚುಕಟ್ಟಾಗಿ ಮಾಡಿರುವ ಈ ಹಾಸ್ಯ ಭರಿತ ಚಿತ್ರವನ್ನು ವಯಸ್ಸಿನ ಮಿತಿ ಇಲ್ಲದೆ ಎಲ್ಲರೂ ಮುಜುಗರವಿಲ್ಲದೆ ನೋಡಿ ಬರಬಹುದು, ೨ ಘಂಟೆಗಳ ಕಾಲ ಹಗುರಾಗಿರಬಹುದು!
ಈ ಚಿತ್ರ ಕಡಿಮೆ ಖರ್ಚಿನಲ್ಲಿ ಸಹ ಜನರನ್ನು ಆಕರ್ಷಿಸುವ ಕಥೆ ಹೇಳಿ, ಜನರನ್ನು ಥಿಯೇಟರ್ಗೆ ಕರೆಸಬಹುದೆಂದು ಸಾಬೀತು ಮಾಡಿದೆ. ಬೆಂಗಳೂರಿನಲ್ಲಿ ಚಿತ್ರ ಜುಲೈನಲ್ಲಿ ರಿಲೀಸ್ ಆದಾಗ ಎಲ್ಲರೂ ಥಿಯೇಟರ್ಗೆ ಹೋಗಿ ನೋಡಿ, ಮನಸ್ಪೂರ್ವಕವಾಗಿ ನಕ್ಕು, ಮೊಟ್ಟೆ ಎಂದು ಕರೀತಿರೋ, ಅಥವಾ ಮೊಟ್ಟೆಯಾಗಿದ್ದರೂ ಅದನ್ನ ಸಂತೋಷದಿಂದ, ಸ್ವೀಕರಿಸುತ್ತೀರೋ ನೀವೇ ನಿರ್ಧರಿಸಿ!

Here is a small peek into audience feedback :







Thursday, March 16, 2017

ಪ್ರಶ್ನೆ ಪತ್ರಿಕೆ

ಸದಾ ಕಣ್ಮುಂದೆ ಓಡಾಡುತ ಹೃದಯ ಕದ್ದಿರುವ ಗೆಳತಿಗೆ ತನ್ನ ಪ್ರೀತಿಯ ನಿವೇದನೆ ಮಾಡುತ್ತಿರುವ ಪ್ರೇಮಿಯೊಬ್ಬನ ಮನಸಿನಾಳದ ಮಾತುಗಳು, ನನ್ನ ಕಲ್ಪನೆಯಲ್ಲಿ .... ಓದಿ ನಿಮ್ಮ ಅನಿಸಿಕೆ, ಅನುಭವಗಳನ್ನು ನನ್ನೊಂದಿಗೆ ಹಂಚಿಕೊಳ್ಳಿ.... :)

ಮುದ್ದಾದ ನಿನ್ನ ಹೃದಯ
ನಿನ್ನ ಬಳಿಯೆ ಇದೆಯಾ?
ಹಾಕುವೆನು ಅರ್ಜಿಯಾ,
ತೊರಿಸು ಕಾಳಜಿಯ

ಕಿಲಕಿಲನೆ ನಕ್ಕಾಗ,ಜುಮುಕಿಯ ತಕಧಿಮಿಥ
ಹೇಳಲಿ ಏನೆಂದು
ಎದುರು ನೀ ನಿಂತಾಗ,ನನ್ನೆದೆಯ ಏರಿಳಿತ
ದೂರಲಿ ಏನೆಂದು

ನಾಚಿ ನೀ ಹೊರಟಾಗ, ಮನಸಾಯ್ತು ಕಣ್ಮರೆ
ಕಿರುನೋಟ ಎಸೆದಾಗ, ನಿಂತೊಯ್ತು ನನ್ನುಸಿರೆ

ಹಾಕಿಬಿಡಲೆ ಅರ್ಜಿಯಾ
ತೊರಿಸು ಕಾಳಜಿಯ

ನನ್ನದಲ್ಲದ ದಾರಿಯಲ್ಲಿ, ನಿನಗಾಗಿ ಕಾದು ನಿಂತೆ
ಕೇಳು ಯಾಕೆಂದು
ಹೋಗದಿರು ನೋಡಿ ನನ್ನ, ಕಂಡರೂ ಕಾಣದಂತೆ
ದಾರಿಯ ಧೂಳೆಂದು

ಪ್ರಶ್ನೆಯಲಿ ಕೊನೆಗೊಂಡಿದೆ ಪರೀಕ್ಷೆ
ಉತ್ತರಿಸುವೆ ಸರಿಯಾಗಿ ಎಂದೇ ನಿರೀಕ್ಷೆ

ಹಾಕಿರುವೆ ಅರ್ಜಿಯಾ,
ತೋರಿಸಮ್ಮ  ಚೂರು ಕಾಳಜಿಯ

Saturday, February 25, 2017

ನಾ ಜಾರುತಿಹೆ

ಕಿಟಕಿ ಬದಿಯಲಿ ನಿಂತು
ಚಾ ಹೀರದಿರು ಚೆಲುವೆ,
ನಾ ಜಾರುತಿಹೆ......
ಮುಗಿಲು ಸೋರಿ
ತಂಪೆರಗಿರಲು.....
ಕಾಡಿಗೆ ತೀಡಿದಾ ನೊಟ ಕಾಡಿದೆ,
ನಾ ಜಾರುತಿಹೆ........

ಉಫ್ಫ್!!! ಮುಗುಳ್ನಗದಿರು,
ಮಿಂಚೆರಗಿದಂತಾಗಿದೆ  ,
ನಾ ಜಾರುತಿಹೆ......

ಒಂದೇ ಸಮನೇ ಓಡಿದೆ,
ಏದುಸುರಿನಾ ಓಟ...
ಕಲಿಸುವರು ಯಾರು,
ಹೃದಯ ದೋಚುವ ಪಾಠ

ಸನ್ನೆ ಮಾಡಿದರೆ,
ಸಂಬಂಧ ಕಟ್ಟು ವೆನು
ನೋಡೊಮ್ಮೆ ಚಾ ಮುಗಿವ ಮುನ್ನ,
ನಾ ಜಾರುತಿಹೆ

Tuesday, February 9, 2016

ಆಡ ಬಯಸಿದೆ ಮನ...

ಆಡ ಬಯಸಿದೆ ಮನ
ನಿನ್ನೊಂದಿಗೆ  
ಆಡ ಬಯಸಿದೆ ಮನ

ನಿನ್ನ ದಾವಣಿ ಜೀರ್ಕುಣಿಕೆ ಹಾಕಿದೆ
ಮನ ಮೂಕಾಗಿ ಕೂಗಿದೆ
ಗಾಳಿ ಹಾಕಬಾರದೆ ?

ಆಡ ಬಯಸಿದೆ ಮನ
ನಿನ್ನೊಂದಿಗೆ  
ಆಡ ಬಯಸಿದೆ ಮನ

ಮಿಂಚಂತೆ ನಿನ್ನ ನೊಟ ಎರಗಿದೆ,
ಆಯಸ್ಕಾಂತವದು ನನ್ನ ಸೆಳೆದಿದೆ
ಗೋಲಿಯಂತ ಆ ಕಣ್ಣಿಗೆ,
ಮುತ್ತನಿಡಲೆ ನಾಮೆಲ್ಲಗೆ ?

 ಆಡ ಬಯಸಿದೆ ಮನ
ನಿನ್ನೊಂದಿಗೆ  
ಆಡ ಬಯಸಿದೆ ಮನ

ಜಡೆಯನೊಮ್ಮೆ ಎಳೆಯಲೇ?
ಇರುಳೆನ್ದು ಅದರಲ್ಲಿ ಹೊರಳಲೆ ?
ಬಳೆಯನೊಮ್ಮೆ ಕೆದಕಲೆ?
ಮದರಂಗಿಯ ನಾ ಕೈಮೇಲೆ ಗೀಚಲೆ????

ಆಡ ಬಯಸಿದೆ ಮನ
ನಿನ್ನೊಂದಿಗೆ  
ಆಡ ಬಯಸಿದೆ ಮನ


Wednesday, September 16, 2015

ಗುಬ್ಬಿ ಮರಿ




ತೊಟ್ಟಿಲ ತೊರೆದೆ ನಾನು
ರೆಕ್ಕೆಯ ಕಟ್ಟಿದೆ ನೀನು

ಜೊಗುಳವ ನೀ ಹಾಡಿದೆ
ಅಂಗಳದಿ ಆಡಿ ನಾ ಬೆಳೆದೆ

ಗುಬ್ಬಿ ಮರಿ ನಿನಗೆ ನಾನೆಂದೆಂದೂ
ನಿನ್ನ ಪರಿ ಪ್ರೀತಿಸಲು ಇರಲಾರರೆಂದೂ

ಕಾಡಲು ಸಾಧ್ಯವೇ ಜಗದೊಳಾವಾ ಗುಮ್ಮ?
ಇರಲು ಆಶ್ರಯದಾತೆ, ಕಾಯುವ ನನ್ನ ಅಮ್ಮಾ

Sunday, December 29, 2013

ಮನದ ಕಿಟಕಿಯ ತೆರೆದು ನೋಡು ನೀನ್ಹೊರಗೆ....!

ಮನದ ಕಿಟಕಿಯ ತೆರೆದು ನೋಡು ನೀನ್ಹೊರಗೆ.....
ಮನದ ಕಿಟಕಿಯ ತೆರೆದು ನೋಡು ನೀನ್ಹೊರಗೆ.....

ಬಿರುಗಾಳಿ ಇಹುದಹುದು,
ಬಿರುಸಾದ ಮಳೆಯಿಹುದು,
ಆದ ಸರಿಸಿ ನೋಡಿದರೆ,
ನೀ ನಡೆವ ದಾರಿಯಿಹುದು....

ಮನದ ಕಿಟಕಿಯ ತೆರೆದು ನೋಡು ನೀನ್ಹೊರಗೆ.....

ಶೂನ್ಯವನು ತೊರೆದು,
ಎದುರಿಗಿನ ಬೆಳಕ ನೋಡು
ಕಿರುಬೆರಳ ಹಿಡಿದು,
ಮುನ್ನಡೆವ ಮಗುವ ನೋಡು...

ಮನದ ಕಿಟಕಿಯ ತೆರೆದು ನೋಡು ನೀನ್ಹೊರಗೆ.....

ಗೋಡೆಯಿದೆಯೆಂದು ಬೆನ್ನ ಮಾಡದಿರು,
ಕೂಗಿ ನೋಡೊಮ್ಮೆ, ನೆರವೊಂದು ಬರಬಹುದು.
ಹೊರಗಲ್ಲ ಗದ್ದಲ, ಒಳಗಿಹುದು ತಳಮಳ...
ಅದಕೆಂದೇ,...

ಮನದ ಕಿಟಕಿಯ ತೆರೆದು ನೋಡು ನೀನ್ಹೊರಗೆ.....
ಮನದ ಕಿಟಕಿಯ ತೆರೆದು ನೋಡು ನೀನ್ಹೊರಗೆ....

Tuesday, August 21, 2012

ಒಲವಿನ ರಾಗ




ಹನಿಯೊಂದು ನದಿಯನ್ನು ಚುಂಬಿಸಿದಾಗ, 
ಒಲವೊಂದು ನನ್ನೆದೆಯ ಅಪ್ಪಿಕೊಂಡಾಗ, 
ಮೂಡಿ ಬಂತೊಂದು, ಮೂಡಿ ಬಂತೊಂದು, 
ಮೂಡಿ ಬಂತೊಂದು ಅಲೆಅಲೆಯ ತರಂಗ ! 
 
ಚಿಲಿಪಿಲಿ ಹಾಡಿದೆ ಮರದ ಗೂಡಲಿ, 
ಚೆಲ್ಲಾಪಿಲ್ಲಿ ಆಗಿದೆ ಮನದ ಮಹಲಲಿ. 
ತಂಗಾಳಿ ಮೈಸೋಕಿ ನಡುಗಿ ನಿಂತಾಗ, 
ನಿನ್ನ ತೋಳಲಿ ದೊರೆತಿದೆ ಬೆಚ್ಚನೆ ಜಾಗ! 
 
ಮಳೆಸುರಿದು ಒಲಾಡಿ ನದಿಯ ಸೇರಿದೆ, 
ನಿನ್ನ ಪ್ರೀತಿ ಕೈಚಾಚಿ ನನ್ನ ಕರೆದಿದೆ. 
ಕೈ ಹಿಡಿದು ಜೊತೆಯಲ್ಲಿ ನೀನು ನಡೆದಾಗ 
ನಸು ನಗುತಾ ಬರೆದಾಯ್ತು ಒಲವಿನ ರಾಗ!! 

Tuesday, March 6, 2012

ಬೇಸರವಿಲ್ಲದ ಬೇಸಿಗೆ....


ಬೇಸಿಗೆ ಬಂತು ಅಂದ್ರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಆದರೆ ಇದೆಯ ಖುಷಿ ಎಲ್ರಿಗೂ ಇದೆಯಾ ಅಂತ ನಂಗೆ ಕರೆಂಟ್ ಹೋದಾಗ ಒಂದು ಸಣ್ಣ ತುರಿಕೆ ಶುರು ಆಗಿ ಈ ತರಹ ಒಂದು ಲೇಖನ ಬರೆಯೋ ಹಾಗಾಯ್ತು.
ಚಿಕ್ಕವರಿದ್ದಾಗ , ನಾನೇ ಹೇಳಿದ ಹಾಗೆ ಬೇಸಿಗೆ ರಜೆಯನ್ನ ಇಡೀ ವರ್ಷ ಎದುರು ನೋಡ್ತಾ ಇದ್ವಿ.ಅದು ಬರಿ ರಜ ಸಿಗುತ್ತೆ ಅನ್ನೋ ಖುಷಿ ಅಲ್ಲ.... ರಜೆಯೊಂದಿಗೆ ಎಷ್ಟು ಪರ್ಕ್ಸ್ ಕೂಡ ಒಟ್ಟಿಗೆ ಬರ್ತಿತ್ತು ಅಂತೀರಾ? ರಜ ಶುರು ಆಗೋ ಕೆಲವೇ ದಿನಕ್ಕೆ ಉಗಾದಿ ಬರೋದು ಅದರೊಟ್ಟಿಗೆ ಮಾವಿನ ಚಿತ್ರಾನ್ನ ದಿಂದ ಶುರುವಾಗಿ, ಉಣಿಸೇ ಹಣ್ಣು ಜಜ್ಜಿ ಬೆಲ್ಲ ಹಾಕಿ ತಿನ್ನೋದೆನು, ಮಾವಿನ ಕಾಯಿ ಎಲ್ಲಿಂದಾದರೂ ಕದ್ದು ತಂದು ಕಳ್ಳಲ್ಲಿ ಚಚ್ಚಿ ಉಪ್ಪು ಕಾರ ಹಾಕಿ ಕಣ್ಣು ಹೊಡಿತ ಗೆಳೆಯರೊಂದಿಗೆ ಚಪ್ಪರಿಸೋಡಿದ್ಯಲ್ಲ... ಅದ್ರ ಮಜಾನೇ ಬೇರೆ.ಅಷ್ಟೇ ಅಲ್ಲ ಕಂಡ ಕಂಡ ಕಡೇಯ ಸೀಬೆ ಹಣ್ಣಿನ ಮರಕ್ಕೆ ಹಾರೋದಕ್ಕೂ ಏನು ಮಿತಿ ಇರುತ್ತಿರಲಿಲ್ಲ.ಇನ್ನೂ ಅಮ್ಮಂದಿರಿಗೆ ಮಕ್ಕಳು ಮನೇಲಿ ಯಾಕಿದಾವೋ ಅನ್ಸೋ ಅಷ್ಟು ಗೋಳ್ ಹೊಯ್ಕೊಂಡು "ಅಮ್ಮ ಅದು ಕೊಡು, ಇದು ಕೊಡು" ಅಂತ ತಲೆ ತಿನ್ನೋದಕ್ಕೂ ಅಮ್ಮ ಎಲ್ಲ ಮಾಡಿಕೊಟ್ಟು ಮಧ್ಯಾನ ಬೈದೊ ಹೊಡೆದೋ ಗದರಿಸಿ ಸ್ವಲ್ಪ ಹೊತ್ತು ಮಲಗಿಸುತ್ತಿದ್ದಳು.ಮತ್ತೆ ಸಂಜೆ ಆಟಕ್ಕೆ ಹೋಗೋದಕ್ಕೆ ಮತ್ತೆಲ್ಲಿ ಬೈತಾಳೊ ಅನ್ನೋ ಭಯದಲ್ಲೇ ಪೀಟಿಕೆ ಹಾಕಿಯೋ ಅತ್ವ ಹೊರಗೆ ಕಾಣೊ ಗೆಳಾಯ್‌ನನ್ಣ ಸನ್ನೆ ಮಾಡಿ ಮನೆಗೆ ಬಂದು ಅಮ್ಮನ ಪೂಸಿ ಹೊಡೆಯೋಕೆ ಕೇಳುತ್ತಿದ್ದ ನೆನಪು ಈಗಲೂ ಬಂದು ಒಂದು ನಗೆ ಹಾಗೆ ಮಿಂಚಿ ಹೋಗತ್ತೆ.
ಇನ್ನೂ ಹಳೆಯ ವರ್ಷದ ಹಳೆಯ್ ಪುಸ್ತಕಗಳಲ್ಲಿ ಬೇಕಾದದ್ದನ್ನು ಇಟ್ಟುಕೊಂಡು ಕೆಲಸಕ್ಕೆ ಬಾರದ ಪುಸ್ತಕ ಅತ್ವ ಇಷ್ಟ ಆಗದ ಮಿಸ್ ಕೊಡುತಿದ್ದ ಹೋಮ್‌ವರ್ಕ್ ಪುಸ್ತಕಗಳನ್ನ ಹರಿಯುವಾಗ ಆ ಮಿಸ್ಸನ್ನೆ  ಹರಿದಂತ ರಾಕೆಟ್ ಮಾಡಿ ದೂರಕ್ಕೆ ಬಿಟ್ಟ ಖುಷಿ ಪಡುತಿದ್ದ ಪರಿಯನ್ನ ಕಂಡರೆ ಭಾರತ ಪಾಕಿಸ್ತಾನದ ಮೇಲೆ  ಗೆದ್ದ ಸಂಭ್ರಮವೂ ಇದಕ್ಕೆ ಸಾಟಿ ಇರಲ್ವೇನೋ!
ಹಾಗಂತ ಏನು ತರಲೆ ಮಾಡೋದೇ ಕೆಲಸ ಅಲ್ಲ... ಬೆಳಗ್ಗೆಯೇ ಎದ್ದು ಜಾಗಿಂಗ್ ಅಂತ ಗುಂಪು ಕಟ್ಟಿಕೊಂಡು ಹೊರಗೆ ಹೋಗಿ ಆಟ ಆಡಿ , ಅಲ್ಲಿ ಇಲ್ಲಿ ಸಿಗೋ ಹೂವುಗಳನ್ನ ಹೆಕ್ಕಿ ತಂದು, ಅಮ್ಮನ ಮನ ಗೆಲ್ಲೋ ಅವಕಾಶವೂ ಇರುತಿತ್ಟು. ಅಷ್ಟು ಸಾಲದೆಂಬಂತೆ ಪರಸ್ಪರ ಉಪಯೋಗ ಆಗೋ ಅಂತ ಒಂದು ಕಾರ್ಯ ಇತ್ತು ನೋಡಿ - ಹಪ್ಪಳ ಸಂಡಿಗೆ ಹಾಕೋದು. ಅಮ್ಮ ಹಿಟ್ಟು ಮಾಡಿ ಒಂದು ಚಮಚೆ ಕೊಟ್ಟು ತೆಳುವಾಗಿ ಹಾಕು ಮಗಳೆಅಂತ ಹೇಳಿ ಒಂದು ಪಂಚೆ ಮುಂದಿಟ್ಟು ಹೋದರೆ, ಅದನ್ನು ಪೂರ್ತಿ ರಂಗೋಲಿ ಬಿಡಿಸೋ ಜವಾಬ್ದಾರಿ ನನ್ನದು.ಕಾಗೆ ಬರದಂತೆ ನೋಡಿಕೊ ಅಂತ ಹೇಳಿ ಹೋದರೆ ಅರ್ಧ ಒಣಗಿದ ಆ ಸಂಡಿಗೇನ ಕಾಗೆ ಬರದಂತೆ ತಡೆದು, ನಾನೇ ದೊಡ್ಡ ಕಾಗೆಯ ಹಾಗೆ ಅರ್ಧ ಮುಗಿಸುತ್ತಿದ್ದೆ!
ಸಂಜೆ ಹೊತ್ತಿಗೆ ಅಮ್ಮ ಮಾಡಿದ ಸಂಡಿಗೆಯೋ , ಕಡಲೆ ಪುರಿ ಒಗ್ಗರಣೆಯೋ ಅತ್ವ ಅವಲ್ಲಕ್ಕಿಯನ್ನು ಚೆನ್ನಾಗಿ ತಿಂದು ಕಣ್ಣ ಮುಚ್ಚಾಲೆ, ಐಸ್ ಪೈಸ್, ಲಗೋರಿ, ಕಲ್ಲು ಮಣ್ಣು ಅಂತ ಅಡಕ್ಕೆ ಹೋದರೆ ಮನೆಗೆ ಇನ್ನೂ ತಲುಪೋದು ಏನಾದ್ರೂ ಒಂದು ಎಡವಟ್ಟು ಮಾಡಿಕೊಂಡೆ. ಗಾಯ ಆದ ಭಯಕ್ಕಿಂತ ಅಮ್ಮನ ಬಾಯಿಂದ ಬರುವ ಬೈಗುಳವೆ ತುಂಬಾ ನೋವುಟುಂಬುವಂತೆ ಭಾಸವಾಗಿ ಎಷ್ಟು ಗಾಯಗಳನ್ನ ತೋರಿಸದೇ ಇರಲು ಹಾರ ಸಾಹಸ ಪಡುತ್ತಿದ್ದ ಪರಿಯನ್ನು ಈಗಲೂ ಉಳಿದಿರುವ ಕೆಲವು ಗಾಯದ ಗುರುತು ನೆನಪಿಸುತ್ತದೆ.
ಇಷ್ಟೆಲ್ಲಾ ಮನೆಯಲ್ಲಾದರೆ ಇನ್ನೂ ಊರಿಗೆ ಹೋಗುವ ಖುಷಿಯನ್ನoತೂ ಹೇಳತೀರದು.ವರ್ಷಕ್ಕೆ ಒಮ್ಮೆಯೋ ಅತ್ವ ಎರಡು ಬಾರಿ ಮಾತ್ರ ಸಿಗುವ ಸ್ನೇಹಿತರನ್ನ ಹೋಗಿ ನೋಡೋಕೆ ಏನೋ ಒಂದು ರೀತಿಯ ಖುಷಿ.
ಅಲ್ಲಿ ಬುಸ್ ಇಳಿಯುತ್ತಿದ್ದಂತೆ ಯಾವುದಾದರೂ ಪರಿಚಿತ ಮುಖದ ದರ್ಶನವಾಗುತ್ತಾ ಅಂತ ಓಡಿ ಹೋಗುವ ತವಕ ಬಸ್ ಸ್ಸ್ಟಾಂಡ್ ತಲುಪುವ ಮುನ್ನವೇ ಶುರು ಆಗ್ತಾ ಇತ್ತು.ಊರಿನಲ್ಲಿ ಅಜ್ಜಿ ಸುಟ್ಟಿಕೊಡುವ ರಾಗಿ ರೊಟ್ಟಿಗೆ ಮನೆಯಲ್ಲೇ ಮಾಡಿದ ತುಪ್ಪ ಬೆಣ್ಣೆ ಹಾಕಿ ನೆಕ್ಕಿ ನೆಕ್ಕಿ ತಿಂದು, ಕಡೆದು  ಮಾಡಿದ ಮಜ್ಜಿಗೆಯನ್ನ ಗಟಗಟ ಅಂತ ಕುಡಿಯೊ ಸವಿಗೆ, ತಂಪಾದ ತೋಟ ಮರದ ಕೆಳಗೆ ತಂಪಾಗಿ ಒರಗಿ ಮಲಗಿದಾಗ ಬೇಸಿಗೆಯ ಬಿಸಿ ಎಲ್ಲಿ ಮಾಯವೋ!
ಈಗ ಏನಿದೆ? ನಾನು ನೋಡೋ ಈಗಿನ ಮಕ್ಕಳು ಬಾಯೀ ತೆಗೆದ್ರೆ ಮಾರಿಟಿಯಸ್ , ಸಿಂಗಪುರ್ ಅಂತಾವೆ ಆದ್ರೆ ಅಜ್ಜ ಅಜ್ಜಿ ಮನೆಯ್ ಇರಲ್ಲ... ರಜಾದಲ್ಲಿ ಮಜ್ಜಿಗೆ ಬಿಡಿ ಬರಿ ಮಿಲ್ಕ್‌ಶೇಕ್ , ಪಿಜ಼್ಜ಼ ಬರ್ಗರ್ ತಿಂಡ್‌ಕೊಂಡು, ಮನೇಲೆ ಕೂತು ಕಂಪ್ಯೂಟರ್ ಗೇಮ್ಸ್ ಆಡ್ತಾರೆ. ಕರೆಂಟ್ ಹೋದ್ರೆ ಜೀವನನೆ ಇಲ್ಲ ಅನ್ನೋ ರೀತಿ ಹಿಂಸೆ ಪಡ್ತಾರೆ. ಆಗ ನಂಗೆ ಕರೆಂಟ್ ಇದ್ರು ಒಂದೇ ಇಲ್ದೇ ಇದ್ರು ಒಂದೇ , ಯಾಕಂದ್ರೆ ನಂಗೆ ನಿಜ ಜಗತ್ತಿನ ಗೆಳೆಯರು ಎದುರಿಗೆ ಸಿಕ್ಕಿ ಆಟ ಆಡ್ತೀದ್ವಿ. ಈಗ ಏನಿದ್ದರೂ ಫೇಸ್ ಬುಕ್ಫ  ಪೋಕ್ ಮಾಡಕ್ಕೆ ಸಿಗ್ತಾರೆ :)
ಇಲ್ಲಿ ಇದನ್ನ ಕಂಪ್ಲೇಂಟ್ ಅಂದ್ಕೊಳ್ಳಬೇಡಿ. ಪರಿವರ್ತನೆ ಜಗದ ನಿಯಮ ಅಂತೆ. ಅದನ್ನ ಯಾರು ತಾನೇ ತಡೆಯೋಕೆ ಆಗತ್ತೆ.ನಂಗೆ ಅದ್ರಲ್ಲಿ ಖುಷಿ ಇದ್ದಿರಬಹುದು ಆದರೆ ಈಗಿನ ಮಕ್ಕಳಿಗೆ ಟೆಕ್ನಾಲಜೀ ಎ ತಂದೆ ತಾಯಿ ಬಂಧು ಬಳಗ ಎಲ್ಲ. ಒಂದು ರೀತಿಯಲ್ಲಿ ಒಳ್ಳೆಯದೇ ಆದರೂನೂ, ಮನುಷ್ಯ ಸಂಘ ಜೀವಿ ಅನ್ನೋದನ್ನ ದೂರ ಮಾಡುವಂತ ಜೀವನ ಶೈಲಿಗೆ ನಿಧಾನವಾಗಿ ಜಾರುತಿದ್ದ ಹಾಗೆ ಅನಿಸುತ್ತೆ.
ಕರೆಂಟ್ ನ ಆ ಪರಿ ಬೈಕೊಳೋಕೆ ಹೋರಟ ನಂಗೆ ಕರೆಂಟ್ ಒಂದು ಹೋಗಿದ್ದು ಈಗ ವಾರವಾಯ್ತು ನೋಡಿ. ಕರೆಂಟ್ ಹೋಗಿಲ್ಲ ಅಂದಿದ್ರೆ ಮನೇಲಿ ಕೂತು ಕೆಲ್ಸಾ ಮಾಡ್ತಿದ್ದ ನಂಗೆ ಬೆವರೋ ಅನುಭವ ಆಗ್ತಾ ಇರ್ಲಿಲ್ಲ, ನೆನಪುಗಳನ್ನ ಮೆಲುಕು ಹಾಕೋದಕ್ಕೂ ಆಗ್ತಿರಲಿಲ್ಲ....
ಇನ್ನೂ ಏನೇನೋ ನೆನಪು ಎಳೆ ಎಳೆಯಾಗಿ ಬರುತ್ತ ಇತ್ತು. ಅದಾರೆ ಕರೆಂಟ್ ಒಂದು ವಾಪಸ್ ಬಂತು ನೋಡ್ರೀ, ನಿಜ ಜೀವನಕ್ಕೆ ಮರಳಿ ನನ್ನ ಕೆಲಸ ಕಾರ್ಯಗಳನ್ನ ಮೂಗಿದ್ಸೋದಕ್ಕೆ ಹೊರಡಬೇಕು.
ಈ ಬೇಸಿಗೆಯನ್ನು ನಿಮ್ಮ ಸ್ನೇಹಿತರೊಂದಿಗೆ ಹೋಳಿ ಆಡಿ ಶುರು ಮಾಡಿ, ನಿಮ್ಮ ಬಾಲ್ಯದ ಅನುಭವಗಳನ್ನು ಇಲ್ಲಿ ಹಂಚಿಕೊಳ್ಳಿ  :)


Saturday, February 4, 2012

ಗ್ರಹಣ




ಡಿಸೆಂಬರ್ ನಲ್ಲಿ ಗೊಕರ್ಣ ಹೋಗಿದ್ದ ಸಮಯದಲ್ಲಿ ಹುಣ್ಣಿಮೆ ಯ ರಾತ್ರಿಯಲ್ಲಿ ಗ್ರಹಣ ನೋಡೋ ಭಾಗ್ಯ ನನ್ನದಾಗಿತ್ತು. ಕಡಲ ತೀರದಲ್ಲಿ ಇರುಳು ಬೆಳಕಿನ ಆಟ ನನಗೆ ತೋಚಿದ ರೀತಿಯಲ್ಲಿ ಇಲ್ಲಿ ವರ್ಣಿಸಿರುವೆ.... ಆದರೆ ಇದು ಪ್ರಕೃತಿಯ ಆ ಸೌಂದರ್ಯದ  ಕೇವಲ ೧೦% ವರ್ಣನೆ ಅಷ್ಟೇ..... ಇಲ್ಲಿ ಇರುವುದೆಲ್ಲ ಅಲಿ ಕಂಡ ದೃಶ್ಯಾವಳಿ.... ಸಂಪೂರ್ಣ ಗ್ರಹಣ, ಹಾಲು ಬೆಳದಿಂಗಳು, ವಿಶಾಲ ಸಮುದ್ರ, ಉಕ್ಕು ತಿದ್ದ ಅಲೆಗಳು, ಜೊದಿಗಳ ಕಲರವಗಳು, ತಾರೆಯೊಂದರ ಸ್ಪೊಟ..... ಎಲ್ಲವೂ ಅಪೂರ್ವ ವಿಸ್ಮಯ....





ಇರುಳಿನಲಿದೆ ಬೆಳದಿಂಗಳ ಕಣ್ಣಾ ಮುಚ್ಚಾಟ
ಕವಿದಿರದೆ ಮೋಡ ಈ ಅಂಗಳ ತಂದಿದೆ ತೆರೆಗಳ ಆಟ

ಕೈಯಲ್ಲಿ ಕೈ ಹಿಡಿದು ನಡೆಯೋ ಪ್ರೇಮಿಗೆ
ತೆರೆ ನಿನ್ನ ಸಂಗೀತವದು, ಬಾನಲ್ಲಿ ದಾರಿ ದೀವಿಗೆ
ಮರಳ ಮೇಲೆ ಹೆಜ್ಜೆಯಿಟ್ಟು ಸಾಗುತಿತ್ತು ಪಯಣ
ಏನಾಯ್ತೋ ತಿಳಿಯದದು ಹಿಡಿಯಿತು ಗ್ರಹಣ

ಕಾರ್ಗಾಟ್ತಲು ಕವಿದಂತೆ ಕಡಲಿಗೆ
ಬಾನಲ್ಲಿ ತಾರೆಗಳು ಹೊಳೆದವು ಮಿರ ಮಿರ
ತಲೆಯಿಡುವೆ ನಾ ನಿನ್ನ ಮಡಿಲಿಗೆ
ಒಂದಾಗಿ ಎಣಿಸೋಣ ಚುಕ್ಕಿಗಳ ಬಾರ

ಒಂದೊಂದೇ ಒಂದೊಂದೇ ಚುಕ್ಕಿಯ ಆಟ
ಭೋರ್ಗರೆವ ಅಲೆಗಳ ಆಟ
ನಡುನಡುವೆ ನಡೆಯುತ್ತಾ ಚೆಲ್ಲಾಟ
ಭೋರ್ಗರೆದಿತ್ತು ಪ್ರೇಮಿಯ ಸಲ್ಲಾಪ

ಆದಾಗ ಅಲ್ಲೊಂದು ಚುಕ್ಕಿಯಾ ಸ್ಪೊಟ
ಹೊಳಪಲ್ಲಿ ನೆಟ್ಟಿತು ನನ್ನ ಈ ನೊಟ
ಬಯಸಿತು ಮನ  ಕೆಳೊಕೆ ವರ ಒಂದನು
ಕೇಳಿದೆ ಮರಳಿಸಲು ಚಂದಿರನನು

ಹೊರ ಬಂದ ಚಂದಿರನು ಭೂಮಿಯಾ ನೆರಳಿಂದ
ಅಪ್ಪಳಿಸುತಾ ಅಲೆಯೊಂದು ಮರಳಿಸಿತು ಆನಂದ



Monday, September 12, 2011

ಚಿಕ್ಕೆರೆಲಿ ಎದ್ದ, ದೋಡ್ಕೆರೆಲಿ ಬಿದ್ದ....

ಗಣೇಶ ಹಬ್ಬ ಬಂತೆಂದರೆ ಅದೊಂದು "ಹಬ್ಬ" ವೇ ಸರಿ. ಹಿಂದೆ ಎಲ್ಲಾ ಮನೆಮನೆಯಲ್ಲೂ ಗೌರಿ ಗಣೇಶರನ್ನು ತಂದು ಕೂರಿಸಿ ಅಕ್ಕ ಪಕ್ಕದ ಮನೆಯವರನ್ನೆಲ್ಲಾ ಕುಂಕುಮಕ್ಕೆಂದು ಕರೆಯುವ ರೂಢೀಇತ್ತು(ಈಗಲೂ ಇದ್ದರೂ ನಾವಿರುವ ಬೆಂಗಳೂರಿನಲ್ಲಿ ಸದ್ಯ ಪಕ್ಕದ ಮನೆಯಲ್ಲಿ ಯಾರಿದ್ದಾರೆ ಎಂದು ಗೊತ್ತಿದ್ದರೇ ಹೆಚ್ಚು.
ಚಿಕ್ಕವರಿದ್ದಾಗ ಈ ಹಬ್ಬ ಬಂತೆಂದರೆ ಮೊದಲನೆಯ ಸಂತೋಷದ ವಿಷಯ - ಶಾಲೆಯ ರಜೆ! ಸ್ವಾತಂತ್ರ್ಯ ದಿನದ ನಂತರದ  ಮೊದಲನೆಯ ಸರ್ಕಾರಿ ರಜೆ ಬಹುಶ್ಯ ಇದೇ  ಇರುತ್ತದಾದ್ದರಿಂದ ಎಲ್ಲರೂ ಅದಕ್ಕಾಗಿ ಕಾಯುತ್ತಿದ್ದೆವು. ಇನ್ನೂ ಆಗೆಲ್ಲಾ ಸುಮ್ಮನೇ ಹೋಗಿ ಎಂದೂ ಹೊಸ ಬಟ್ಟೆ ಕೊಂಡವರಲ್ಲ ನಾವು....ಹಬ್ಬ ಹರಿದಿನ ಶುರು ಆಯಿತೆಂದರೆ ಹೊಸ ಬಟ್ಟೆಗಳ ಕೊಳ್ಳುವಿಕೆ ಶುರು ಹಾಗೂ ಬಟ್ಟೆ ಅಂಗಡಿಯವರಿಗೆ ನಿಜವಾದ ಅರ್ಥದಲ್ಲಿ ಹಬ್ಬ.
ಇನ್ನೂ ಸಿಹಿ ತಿಂಡಿಗಳ ವಿಷಯದಲ್ಲಂತೂ ಹಬ್ಬವೆ ... ಗಣೇಶನಿಗೆ ನೈವೇದ್ಯಕ್ಕೆಂದು ಅಮ್ಮ ಸಿದ್ದಪಡಿಸುತ್ತಿದ್ದ ತಿಂಡಿಗಳನ್ನು ನಮ್ಮ ನೈವೇಧ್ಯಕ್ಕೆ ಕದ್ದು ಮುಚ್ಚಿ ಹಾರಿಸುತ್ತಿದ್ದ ಆ ದಿನಗಳಲ್ಲಿ ಎಷ್ಟು ಮಜ ಸಿಗ್ತಿತ್ತು... ಆದರೆ ಇಂದಿನ ಲೈಫ್‌ಸ್ಟೈಲ್ ನಿಂದಾಗಿ ಏನು ತಿನ್ನೋಕೆ ಮುಂಚೆಯೂ ಎರಡು ಸಾರಿ ಯೋಚಿಸುವಂತಾಗಿದೆ.

ಈ ಹಬ್ಬದ ಇನ್ನೊಂದು ವಿಶಿಷ್ಟ ಸಂಗತಿಯೆಂದರೆ ಬೀದಿ ಬೀದಿಯಲ್ಲೂ ಪೆಂಡಲ್ ಹಾಕಿ ತರಾವರಿ ಗಣೇಶ ಕೂರಿಸಿ ಕಡಲೆ ಉಸುಲಿ ಪ್ರಸಾದ ಮಾಡಿ ಹಂಚುವುದು.
ಮುಂಚೆಯೆಲ್ಲಾ ಹಬ್ಬದ ದಿನ ಸಂಜೆಯಾಯಿತೆಂದರೆ ಸ್ನೇಹಿತರ ನಡುವೆ ಪೈಪೋಟಿ ಏರ್ಪಡುತಿತ್ತು. ಎಲ್ಲರೂ ತಮ್ಮ ಬೀದಿಯಿಂದ ಶುರುಮಾಡಿ ಎಷ್ಟು ಸಾಧ್ಯವಾಗುತ್ತೋ ಅಷ್ಟೂ ಬೀದಿಗಳಿಗೆ ಹೋಗಿ ವಿವಿಧ ರೂಪ, ನಾನಾ ಬಗೆಯ ಗಣೇಶನನ್ನು ನೋಡಿ ಯಾರು ೨೧ಕ್ಕಿಂತ ಹೆಚ್ಚು ನೋಡಿದೆವು ಎಂದು ಮಾತಿನಲ್ಲೆ ಸೂಪೀರಿಯಾರಿಟೀ  ತೋರಿಸಿ ಖುಷಿ  ಪಟ್ಟು, ನೋಡಿದ ಗಣೇಶಣ್ಣನು ತೋರಿಸಲು ಕರೆದುಕೊಂಡು ಹೋಗುತ್ತಿದ್ದೆವು. ಇದೊಂದು ದಿನ ಮಾತ್ರ ತಾಯಂದಿರು ಬೀದಿ ಸುತ್ತುವ ಮಕ್ಕಳಿಗೆ ಒಪ್ಪಿಗೆ ನೀಡಿ ಕಳಿಸುತಿದ್ದರು.

ಈ ಹಬ್ಬದ ಒಂದು ಸೊಬಗೆಂದರೆ ಇದು ಕೇವಲ ಒಂದು ಮನೆಯ ಪೂಜೆಯಾಗಿ ಉಳಿಯದೆ ಒಂದು ಪ್ರದೇಶದ ಜನರನ್ನು ಒಟ್ಟುಗೂಡಿಸುವ ಶಸ್ತ್ರವೂ ಹೌದು.(ಈ ಹಬ್ಬವನ್ನು ಸಾಮಾಜಿಕ ಸಾಮೂಹಿಕ ಹಬ್ಬವನ್ನಾಗಿ ಮಾಡಿದ ತಿಲಕರಿಗೆ ನನ್ನ ನಮನ) ಹಾಗು ಚಪ್ಪಾಳೆ ತಟ್ಟುವಂತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಕಲಾವಿದರಿಗೆ ಪ್ರೋತ್ಸಾಹ ನೀಡುವ ಸಂದರ್ಭ ಕೂಡ.

ಕರ್ತವ್ಯದ ನಿಮಿತ್ತ ತಂದೆಯವರಿಗೆ ಬೇರೆ ಊರಿಗೆ ವರ್ಗಾವಣೆಯಾದಾಗ ನೋವಾಗಿದ್ದುಂಟು. ಆದರೆ ಅಲ್ಲಿನ ಸಡಗರಗಳಲ್ಲಿ ಪಾಲ್ಗೊಂಡು ಬೆಳೆದಂತೆ ಅದು ಮರೆಯಾಗಿತ್ತು. ಒಮ್ಮೆ ಗಣೇಶನೊಂದಿಗೆ ಟ್ರ್ಯಾಕ್ಟರ್ ನಲ್ಲಿ ನಮ್ಮ ಕ್ಯಾಂಪಸ್ ಪೂರಾ ತಿರುಗಿದ ನೆನಪು ಇಂದು ನಮ್ಮ ಬೀದಿಯಲ್ಲಿ ಒಂದು ಗಣೇಶನ ಮೆರವಣಿಗೆ ನೋಡಿ ನೆನಪಾಗಿದೆ.

ಚಿಕ್ಕವಳಿದ್ದಾಗ ಆ ರೀತಿಯ ಸಡಗರವಾದರೆ, ಓದು ಮುಗಿಸಿ ಕೆಲಸ ಮಾಡಲು ಶುರುವಾದ ಮೇಲೆ ಈ ಹಬ್ಬವೂ ನನ್ನ ಕಲಾ ದಾಹಕ್ಕೆ ಒಂದು ಅವಕಾಶವಾಗಿ ಬರುತ್ತಿತ್ತು. ತರಾವರಿ ರಂಗೋಲಿ ಹಾಕಿ ಗಣೇಶನ ಚಿತ್ರ ಬಿಡಿಸಿ ಅದನ್ನು ನೋಡುವುದು ಬಾರಿ ಸಂತಸ ತರುತ್ತಿತ್ತು. ಬೆಂಗಳೂರಿನ ಕ್ವಾರ್ಟರ್ಸ್  ನಮಗೆ ಎಲ್ಲರ ಪರಿಚಯವೇನು ಅಷ್ಟಾಗಿ ಇರದಿದ್ದರೂ ಒಮ್ಮೆ ಅಲ್ಲಿನ ಹುಡುಗಿಯರೆಲ್ಲ ಸೇರಿ ಗಣೇಶನ ಪ್ರತಿಷ್ಟಾಪನೆ ಮಾಡುವ ಯೋಚನೆ ಮಾಡಿದ್ದೆವು. ಅದನ್ನು ನಮ್ಮ ನಮ್ಮ ತಂದೆ ತಾಯಂದಿರಿಗೆ ಹೇಳಿದ್ದೆ ತಡ ಎಲ್ಲರೂ ನಾ ಮುಂದು ತಾ ಮುಂದು ಎಂಬಂತೆ ಸಹಾಯಕ್ಕೆ ಬಂದು ನಾವು ಮನೆ ಮನೆಗೂ ಹೋಗಿ ಹಣ ಕೂಡಿಸಿ ಗಣೇಶನನ್ನು ಕೂರಿಸಿ, ಹೂವು, ತೋರಣ ಹಾಗೂ ರಂಗೋಲಿಗಳಿಂದ ಬೀದಿಯನ್ನು ಅಲಂಕರಿಸಿ, ತಾಯಂದಿರು ಮಾಡಿ ಕೊಟ್ಟ ಸಜ್ಜಿಗೆ ಪ್ರಸಾದವನ್ನು ಹಂಚಿ ಸಂಜೆಯ ಹೊತ್ತಿಗೆ ಅಲ್ಲಿನ ಎಲ್ಲ ಹಿರಿಯರು ಹಾಗೂ ಕಿರಿಯರಿಗೆ ಕೆಲವು ಆಟಗಳನ್ನು ಆಡಿಸಿ ಸಂಭ್ರಮದಿಂದ ಗಣೇಶನನ್ನು ಕಳಿಸಿಕೊಟ್ಟೆವು. ಹೀಗೆ ೩ ವರ್ಷ ಮಾಡಿದ ನಂತರ ಕಾರಾಣಾಂತರಗಳಿಂದ ಸುಮ್ಮನಾಗಿ ಬಿಟ್ಟೆವು.
ಇತ್ತೀಚೆಗೆ ಅಷ್ಟೊಂದು ಸಡಗರ ಕಾಣದಿದ್ದರೂ, ಅಲ್ಲಲ್ಲಿ ಪೆಂಡಲ್ ನೋಡಿ, " ಇಷ್ಟಾದರೂ ಉಳಿದು ಕೊಂಡಿದೆಯಲ್ಲ!" ಎಂದು ನೆಮ್ಮದಿಯ ಉಸಿರು ಬಿಡುವಂತಾಗಿದೆ.
ಈ ಬಾರಿ ಮದುವೆಯಾದ ಮೊದಲ ಗೌರಿ ಹಬ್ಬವಾದರೂ, ಕೆಲಸ ನಿಮಿತ್ತ ಪರದೇಶಕ್ಕೆ ತೆರಳಿರುವ ಪತಿಯಿಂದಾಗಿ ತುಸು ಬೇಗವೇ ಅಮ್ಮನ ಮನೆಗೆ ಬಂದು ಸೇರಿಕೊಂಡರೂ ಹಬ್ಬದ ದಿನ ಊರಲ್ಲಿ ಇರದಿದ್ದುದರಿಂದ ಈ ಬಾರಿಯ ಹಬ್ಬವೂ ಇಲ್ಲದಂತಾಯಿತು. ಹಬ್ಬ ಬಂತೆಂದರೆ ಅಮ್ಮ ಬೇಗ ಎದ್ದೇಳು ಎಂದು ತಲೆ  ತಿನ್ನುತ್ತಾಳೇ ಎಂದು ಸಿಡಿಮಿಡಿಗೊಳ್ಳುತ್ತಿದ್ದ  ನಾನು ಈ ಬಾರಿಯ ಹಬ್ಬ ಸವಿಯಲಾಗಾದಿದ್ದಾಗ, ವಿದೇಶದಲ್ಲಿನ ಸ್ನೇಹಿತರು ತಾವು ಅಲ್ಲಿ ಪುಟ್ಟ ಗಣೇಶನನ್ನು ಪೂಜೆ ಮಾಡಿ, ಫೋಟೋಗಳನ್ನು ಹಂಚಿಕೊಂಡಾಗ ನಾನು ಈ ಬಾರಿ ಕಳೆದುಕೊಂಡ ಹಬ್ಬದ ಮೌಲ್ಯ ಅರಿವಾಯಿತು. ಹಬ್ಬಗಳು ನಾವು ಭಾರತೀಯರ ಒಂದು ಅಂಗ ಎನ್ನುವ ಮಾತು ಎಷ್ಟು ನಿಜ ಎನ್ನುವುದು ತಿಳಿಯಿತು. " ತೆ ಫ್ಯೂಚರ್ ಆಫ್ ಆ ಕಂಟ್ರೀ ಲೈಸ್ ಇನ್ ತೆ ಹ್ಯಾಂಡ್ಸ್ ಆಫ್ ಯೂತ್"  ಪುಣ್ಯಾತಮರು ಹೇಳಿದ್ದು ಕೇವಲ ರಾಜತಾಂತ್ರಿಕ ವಿಷಯಕ್ಕೆ ಮಾತ್ರವಲ್ಲದೆ ನಮ್ಮ ದೇಶದ ಸಂಸ್ಕೃತಿ ಕಲೆಯ ಉಳಿವಿಗಾಗಿ ಸಹ ಎಂದು ಅರಿವಾಗಿ ಇನ್ನು ಮುಂದೆ ಎಂದೂ ಸಹ ಹಬ್ಬಗಳನ್ನ ಮಿಸ್ ಮಾಡಬಾರದೆಂದು ಅಂದು ಕೊಂಡಿದ್ದೇನೆ.
ಸರಿ ಈಗಷ್ಟೇ ಶ್ರಾವಣ ಮುಗಿದಿದೆ, ಪಿತೃ ಪಕ್ಷ ಶುರುವಾಗುತ್ತಿದೆ.,... ದಸರ ಹಬ್ಬ, ಜಂಬೋ ಮೆರವಣಿಗೆಯ ದಿನಗಳು ಬೆರಳೆಣಿಕೆಯಷ್ಟು ದೂರದಲ್ಲಿದೆ. ಓ ಇರಿ.... ಇನ್ನೂ ಗಣೇಶನ ಉತ್ಸವ ನಡೆಯುತ್ತಲೇ ಇದೆ. ಕೆಳಗಡೆ ಮೆರವಣಿಗೆ ಬರ್ತಾ ಇದೆ, ಹೋಗಿ ಪೂಜೆ ಮಾಡಿಸಿಕೊಂಡು ಬರುತ್ತೇನೆ.... ನೀವು ಹೋಗಿ ಒಂದೆರಡು ಹೆಜ್ಜೆ ಹಾಕಿ ಗಣೇಶನನ್ನು ಬೀಳ್ಕೊಟ್ಟು ಬನ್ನಿ. ಮಿಸ್ ಆಗಿದ್ದರೆ, ಬೇಜಾರು ಮಾಡಿಕೊಳ್ಳಬೇಡಿ.... ದಸರಾದಲ್ಲಿ ದಾಂಡಿಯ ದರ್ಬಾರ್ ಇದ್ದೇ ಇರುತ್ತದೆ, ಅಷ್ಟರಲ್ಲಿ ಹೋಗಿ ಕೊಲಾಟಕ್ಕೆ ಕೋಲು ಕೊಂಡು ತನ್ನಿ....

Tuesday, August 2, 2011

ಆಟ


ಚಂದಿರ ಕರಗಿದ ಮೋಡದ ಒಳಗೆ
ಭಾವವು ಬಾರದು ಯಾತಕೋ ಹೊರಗೆ
ಕಾಣದ ಕೈಯದು ಆಡಿಸಿದ ಹಾಗೆ
ಮನವಿದು ತೇಲಿದೆ ಜೊತೆಯಲಿ ಹಾಗೆ

ಇಂದಿಗೆ ಇಲ್ಲದ ಮುಂದಕೆ ಸಲ್ಲದ
ಹಿಂದಿನ ಬದುಕದು ಬಂದೀಗ ಕಾಡಿದೆ
ಬೆಮ್ಬಿಡದೆ ಕಾಣುವ ನೆನಪಲ್ಲಿ ಸಾಗುತ
ರೆಪ್ಪೆಯಲಿ ಅಪ್ಪಿ ತೇಲಿ ಬಿಡಬೇಕಿದೆ

ಇರುಳಾದ ಮೇಲೆ ಹಗಲೊoದು
ಹಗಳಾದ ಮೇಲೆ ಇರುಳಿರಲೆoದು
ಒಬ್ಬರಿಗೆ ಇರುಳ, ಒಬ್ಬರಿಗೆ ಹಗಳ
ನೀಡಿ ಕೂತನಾತ ತಾ ಆಡಲೆoದು

ಆಟ ನಡೆಸಲೆ ಬೇಕಿದೆ ಈಗ
ಸೋಲೋ ಗೆಲುವೋ ಆಡು ನೀ ಬೇಗ

Voices in my head

I am never alone Those days have gone long There are voices, there are voices… There are voicessssss up - when I close my eyes ...